Posts

Showing posts from 2026

ಹಳ್ಳಿಗೆ ಬೇಕಾದುದು ಡಿಗ್ರಿ ಅಲ್ಲ — ಕೌಶಲ್ಯದ ಪಟ್ಟು..!-- ನರೇಂದ್ರ ರೈ ದೇರ್ಲ

ಹಳ್ಳಿಗೆ ಬೇಕಾದುದು ಡಿಗ್ರಿ ಅಲ್ಲ — ಕೌಶಲ್ಯದ ಪಟ್ಟು..! -- ನರೇಂದ್ರ ರೈ ದೇರ್ಲ         ಇತ್ತೀಚೆಗೆ ನಮ್ಮ ಹಳ್ಳಿಗೆ ಬಂದ ಟಿವಿ ರಿಪೇರಿ ಹುಡುಗನೊಬ್ಬ ನನಗೆ ಒಂದು ದೊಡ್ಡ ಪಾಠ ಹೇಳಿಹೋಗಿದ್ದ. ಪಾಠ ಅಂದರೆ ಭಾಷಣವಲ್ಲ, ಉಪನ್ಯಾಸವಲ್ಲ. ಅವನ ಕೆಲಸ, ಓಡಾಟ, ಅವನ ದಿನಚರಿಯೇ ನನಗೆ ಗ್ರಾಮೀಣ ಉದ್ಯೋಗದ ಒಂದು ಲಾಭಕರ ಮುಖವನ್ನು ಪಾಠವಾಗಿ ಕಲಿಸಿತ್ತು.      ನಮ್ಮನೆಯ ಟಿವಿಯಲ್ಲಿ ಒಂದು ಸಣ್ಣ ತಾಂತ್ರಿಕ ದೋಷವಿತ್ತು.ಒಮ್ಮೆ ಫೋನ್ ಮಾಡಿದರೆ ನಮ್ಮ ಹಳ್ಳಿಯಲ್ಲಿ ಸುಲಭವಾಗಿ ಯಾರೊಬ್ಬರೂ  ಬರೋದು ಕಷ್ಟ. ಐದಾರು ಬಾರಿ ಕರೆ ಮಾಡಿದ ಮೇಲಷ್ಟೇ 'ಬರುತ್ತೇನೆ ಸರ್' ಅನ್ನುವ ಉತ್ತರ. ಬಂದದ್ದು ರಾತ್ರಿ ಹತ್ತು ಗಂಟೆಗೆ. ಕೈಯಲ್ಲಿ ಒಂದು ಚೀಲ, ತಲೆಗೆ ಹೆಲ್ಮೆಟ್, ಹಳೆಯ ಬೈಕ್ ಮೇಲೆ ದಿನದ ಧೂಳು ಬೇರೆ. ಒಂದೇ ನಿಮಿಷದಲ್ಲಿ ಒಂದು ಸ್ಪೇರ್ ಬದಲಿಸಿ ಟಿವಿ ಓಡಿಸಿದ. ಐದು ನೂರು ರೂಪಾಯಿ ಎಂದ. ಕೊಟ್ಟೆ.       “ಇವತ್ತಿನ ಡ್ಯೂಟಿ ಮುಗಿತಾ?” ಅಂತ ಕೇಳಿದೆ. ನಗುತ್ತಾ “ಇಲ್ಲ ಸರ್, ಇನ್ನೂ ಮೂರು ಮನೆಬಾಕಿ ಇದೆ " ಅಂದ. ನನ್ನದು ಆ ದಿನ ಹದಿಮೂರು ಮನೆ. ದಿನಕ್ಕೆ ಹದಿನೈದು ಮನೆ ಎಂದರೆ ಕನಿಷ್ಠ ಐದು ಸಾವಿರ ರೂಪಾಯಿ. ಕೆಲವೊಮ್ಮೆ ಹತ್ತು ಸಾವಿರವೂ ಆಗುತ್ತದೆ. ನಾಲ್ಕು ಸಾವಿರಕ್ಕಿಂತ ಕಡಿಮೆ ಆಗಿದ್ದೇ ಇಲ್ಲವಂತೆ. ಕೇಳಿದೆ—ಓದಿದ್ದು ಎಷ್ಟು? “ಏಳನೇ ಕ್ಲಾಸ್” ಅಂದ. ತಿಂಗಳಿಗೆ ಒಂದು ಲಕ್ಷಕ್ಕಿಂತ...

ಹೆದ್ದಾರಿಯ ವೇಗದಲ್ಲಿ ಮೌನವಾದ ಊರುಗಳು! ನರೇಂದ್ರ ರೈ ದೇರ್ಲ

ಇಂದಿನ ಅಂಕಣ  ಹೆದ್ದಾರಿಯ ವೇಗದಲ್ಲಿ ಮೌನವಾದ ಊರುಗಳು!                   ಒಂದು ಕೃಷಿ ಪ್ರಧಾನ ಹಳ್ಳಿಯನ್ನು  ಸೀಳಿ ಸಾಗುವ ರಾಷ್ಟ್ರೀಯ ಹೆದ್ದಾರಿ  ಆ ಕ್ಷಣದಿಂದಲೇ  ಭೌಗೋಳಿಕವಾಗಿಯಷ್ಟೇ ಅಲ್ಲ, ಮಾನಸಿಕವಾಗಿಯೂ ಆ ಊರನ್ನು ಇಬ್ಬಾಗ ಮಾಡುತ್ತದೆ. ನಕ್ಷೆಯಲ್ಲಿ ಮಾತ್ರ ಅದು ಕಣ್ಣಿಗೆ ಕಾಣಿಸುವ ನೇರವಾದ ಸರಳ ಗೀರು. ಆದರೆ ಅಲ್ಲಿ ಬದುಕುವ ನೆಲದವರ ಬದುಕಿನಲ್ಲಿ ಅದು ತಿರುವು, ತಲ್ಲಣ, ತುಂಡಾಗುವ ನೆನಪು. ನಿನ್ನೆಯವರೆಗೆ ಮನೆಯ ಬಾಗಿಲಿನಿಂದ ನೇರವಾಗಿ ಕಾಲಿಟ್ಟರೆ ತಲುಪುತ್ತಿದ್ದ ಹೊಲ, ಪಂಚಾಯಿತಿ ಕಟ್ಟೆ, ಗೂಡಂಗಡಿ ಗಡಂಗು,ಮೀನಿನ ಅಂಗಡಿ, ಪ್ರೈಮರಿ ಶಾಲೆ ಎಲ್ಲವೂ ಇಂದು  ಹೆದ್ದಾರಿಯ ಆ ಬದಿಯದು!        ಬೆಳಗಿನ ಜಾವ ಹಸುವನ್ನು ಬಿಟ್ಟುಕೊಂಡು, ಬೀಜದ ಮೂಟೆ ಹೆಗಲಿಗೇರಿಸಿಕೊಂಡು ನಡೆದು ಹೋಗುತ್ತಿದ್ದ ದಾರಿ ಇದ್ದಕ್ಕಿದ್ದಂತೆ ಕತ್ತರಿಸಿಬಿಟ್ಟಿದೆ.  ಅಂಡರ್‌ಪಾಸ್ ಇಲ್ಲ, ಸರ್ವಿಸ್‌ರೋಡ್ ಬಹುದೂರ. ಪರಿಣಾಮವಾಗಿ ರೈತನು ತನ್ನದೇ ಹೊಲಕ್ಕೆ ಹೋಗಲು ಮೈಲುಗಟ್ಟಲೆ ಸುತ್ತು ಹೊಡೆಯಬೇಕು. ಆ ಸುತ್ತು ಬರೀ ಕೇವಲ ದೈಹಿಕ ದೂರವಲ್ಲ; ಯಾರದೋ ಹಸು ಪೈರು ಮೇಯುತ್ತಿದ್ದರೂ ಅದನ್ನು ಓಡಿಸಲಾರದ ಸ್ಥಿತಿ. ಸಮಯದ ನಷ್ಟ, ಶ್ರಮದ ನಷ್ಟ, ಹಣದ ನಷ್ಟ. ಒಂದು ದಿನಕ್ಕೆ ಒಂದು ಗಂಟೆ ಹೆಚ್ಚಾಗಿ ನಡೆದು ಹೋಗುವುದು ಎಂದರೆ ಆ ಹೊಲಕ್ಕೆ ಕೊಡುವ ಗಮನ ಸಹಜವಾ...