Posts

ಬಯಸದೇ ಬಂದ ಹರುಷದ ಭಾಗ್ಯ.....(ಮೂಲ ಲೇಖಕ:ಆನಂದ ಗೋಖಲೆ)

ಬಯಸದೇ ಬಂದ ಹರುಷದ ಭಾಗ್ಯ ಸುಪ್ರಭಾತ.... 🙏🏼❤🙏🏼 ನಿಮಗೆ ವಿಜಯಲಕ್ಷ್ಮಿ ಸದಾ ಸರ್ವದಾ ಒಲಿಯುತ್ತಿರಲಿ.... ನಾನಿಂದು ಸ್ವಲ್ಪ ಆರಾಮವಾಗಿದ್ದೇನೆ. ಕೆಲಸದಲ್ಲಿದ್ದೇನೆ.. ನನ್ನ ಜೀವನದಲ್ಲಿ ಒಮ್ಮೊಮ್ಮೆ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಇಂದಿನ ದೃಷ್ಟಾoತ..... ವಸ್ತ್ರ ವಿನ್ಯಾಸ ತರಬೇತಿ ಪಡೆಯುತ್ತಿರುವ B. Sc. ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬರ ಮನೆಯಲ್ಲಿ ಇಂದು ಅವರ ಕುಲದೇವರ ನಿತ್ಯಪೂಜೆಗೆ ಪುರುಷರಾರೂ ಇರಲಿಲ್ಲ. ಹೆಂಗಸರು ಅವರ ಮನೆಯಲ್ಲಿ ನಿತ್ಯಪೂಜೆ ಮಾಡುವಂತಿಲ್ಲ.. ಹಾಗಾಗಿ ಅವರೆಲ್ಲ ಆತಂಕದಲ್ಲಿದ್ದರು. ಅವರಿಗೆ ಹೇಗೋ ನನ್ನ ನೆನಪಾಯಿತಂತೆ. ಸಂಕೋಚದಿಂದ ನನಗೆ ಕರೆ ಮಾಡದೇ ಪರೋಕ್ಷವಾಗಿ ನಾನು ಉಳಿದು ಕೊಂಡಿದ್ದ ಮನೆಯವರಿಗೆ ಕರೆ ಮಾಡಿ ಈ ಪೂಜಾ ಕೆಲಸ ಮಾಡಿ ಕೊಡಬಹುದೇ ಎಂದು ನನ್ನ ಹೆಸರನ್ನು ಉಲ್ಲೇಖಿಸಿದರoತೆ.. ಸ್ವಲ್ಪ ದೂರದಲ್ಲಿದ್ದ ಅವರ ಮನೆಗೆ ಹೋಗಿ ಪೂಜೆ ಪೂರೈಸಿ ಬಂದೆ. ದಕ್ಷಿಣೆ ಕೊಡಲು ಬಂದರು. ಇಷ್ಟು ಸಣ್ಣ ಕೆಲಸಕ್ಕೆಲ್ಲ ದಕ್ಷಿಣೆ ಸ್ವೀಕರಿಸುವುದೇ ಎಂದು ನಯವಾಗಿ ಬೇಡ ಎಂದೆ. ಒತ್ತಾಯ ಮಾಡಿದರೂ ಸ್ವೀಕರಿಸಲಿಲ್ಲ. ಒಂದು ಅವಕಾಶ ಒದಗಿಸಿ ಕೊಟ್ಟಿದ್ದಕ್ಕೆ ನಾನೇ ಧನ್ಯವಾದ ತಿಳಿಸಿದೆ. ತಿಂಡಿ ಅವರೇ ಮಾಡಿ ಬಡಿಸಿದರು. ಧೋoಪರ್ ಪಾಪ್ಪೆ ( ಲೋಖಂಡಿ ಘಾವನ )+ ಮಾವಿನ ಮಿಡಿ ಚಟ್ನಿ.... ಸರಿಯಾಗಿ ಹೊಂದುವ ಕಾಂಬಿನೇಶನ್.. ಜೊತೆಗೆ KT. ಕಾಲೇಜು ಗೆ ಬಂದು ನನ್ನ ಚೀಲ ನೋಡಿದರೆ ಅದರಲ್ಲಿ ಒಂದು ಕವರ್ ನಲ್ಲಿ 1,000 ರೂಪಾಯಿ...

ಖಾಲಿಯಾಗುತ್ತಿರುವ ಸಮಾಜ ನೀರಸ ಜೀವನ.. ಎಲ್ಲಾ ಹಳ್ಳಿಗಳಲ್ಲೂ ಒಂದೇ ಕಥೆ

*ಖಾಲಿಯಾಗುತ್ತಿರುವ ಸಮಾಜ ನೀರಸ ಜೀವನ.. ಎಲ್ಲಾ ಹಳ್ಳಿಗಳಲ್ಲೂ ಒಂದೇ ಕಥೆ:* ಎಲ್ಲಾ ಹಳ್ಳಿಗಳಲ್ಲೂ ಒಂದೇ ಕಥೆ. ಹೆಚ್ಚಿನ ಕುಟುಂಬಗಳಲ್ಲಿ ಗಂಡು – ಹೆಣ್ಣು ಎಂಬಂತೆ 1-2 ಮಕ್ಕಳು. ಎಲ್ಲರಿಗೂ ಬೆಂಗಳೂರಿನಲ್ಲಿ ಕೆಲಸ. ಹೆಂಡತಿ ಮಕ್ಕಳೊಂದಿಗೆ ಅಲ್ಲೇ ಸಂಸಾರ. ದೊಡ್ಡ ಆಸ್ತಿ, ದೊಡ್ಡ ಮನೆ ನೋಡಿಕೊಂಡು 60-70 ದಾಟಿರುವ ವೃದ್ಧ ಅಪ್ಪ –ಅಮ್ಮಂದಿರು ಮಾತ್ರ ಹಳ್ಳಿಯಲ್ಲಿದ್ದಾರೆ. ಅವರಿಗೆ ಕೂಡುವುದಿಲ್ಲ. ಕೆಲಸ ಮಾಡಲು ಶಕ್ತಿಯಿಲ್ಲ. ಕೃಷಿ – ಬೇಸಾಯಕ್ಕೆ ಕೂಲಿ ಕೆಲಸಗಾರರು ಸಿಗುವುದಿಲ್ಲ. ತೋಟ, ಗದ್ದೆ ಎಲ್ಲಾ ಹಾಳು. ತರಕಾರಿಗಳು ಬೆಳೆಯುತ್ತಿಲ್ಲ. ಹಪ್ಪಳ-ಉಪ್ಪಿನಕಾಯಿ ಮಾಡುವವರಿಲ್ಲ. ಎಲ್ಲರೂ ಪೇಟೆಯಲ್ಲಿರುವ ಕಾರಣ ಹಳ್ಳಿಯ ಶಾಲೆಗಳಲ್ಲಿ ಮಕ್ಕಳಿಲ್ಲ. ಮದುವೆ- ಉಪನಯನಕ್ಕೆ ಪುರ್ರೆಂದು ಎಲ್ಲರೂ ತಮ್ಮ ತಮ್ಮ ವಾಹನಗಳಲ್ಲಿ ಹಾರಿ ಬರುತ್ತಾರೆ. ಊಟ ಮಾಡಿ ಕೈ ತೊಳೆದು ತಿರುಗಿ ನೋಡಿದಾಗ ಮತ್ತೆ ಬೆಂಗಳೂರಿಗೆ ಹೊರಡಲು ಕಾರು ಸ್ಟಾರ್ಟ್ ಆಗಿದೆ. ಸಂಬಂಧಗಳು ಕಳಚಿಕೊಳ್ಳುತ್ತಿವೆ. ಹೆತ್ತ ಕರುಳಿಗೆ ಮಕ್ಕಳನ್ನು, ಮೊಮ್ಮಕ್ಕಳನ್ನು ಮುದ್ದಿಸುವ, ಆಲಿಂಗಿಸುವ ಅವಕಾಶವಿಲ್ಲ, ಉದ್ಯೋಗದಲ್ಲಿರುವ ಮಕ್ಕಳಿಗೆ ಸ್ವಲ್ಪವೂ ಸಮಯವಿಲ್ಲ. ಹಳ್ಳಿಯ ಶಾಲೆಗಳಲ್ಲಿ ಸ್ಕೂಲ್ ಡೇ ಗೆ ಜನರಿಲ್ಲ. ರಾಮನವಮಿಯಾಗಲಿ, ಗಣೇಶೋತ್ಸವವಾಗಲಿ, ಸ್ವಾತಂತ್ರ್ಯ ದಿನಾಚರಣೆಯಾಗಲಿ, ಮೆರವಣಿಗೆ ಹೋಗಲು ಹಳ್ಳಿಗಳಲ್ಲಿ ಮಕ್ಕಳಿಲ್ಲ. ವೃದ್ಧ ಅಜ್ಜಂದಿರಿಗೆ ನಡೆಯಲು ಆಗುವುದಿಲ್ಲ. ಒಳ್ಳೆ...

ಚಿತ್ಪಾವನಿ ಭಾಷೆ... ಚಿದಂಬರ ಕಾಕತ್ಕರ್ ಅವರ ಲೇಖನ

ಚಿತ್ಪಾವನಿಯನ್ನು ಅನುನಾಸಿಕ  ಮತ್ತು ವಿಶಿಷ್ಟ ಉಚ್ಚಾರಗಳ ಸಹಿತ ಬರೆಯಲು ಆಗುತ್ತದೆ. ಇಲ್ಲಿ ನಾನು ಬರೆದುದನ್ನು ಓದಿ. ಯಾವುದನ್ನು ಹೇಗೆ ಬರೆಯಬೇಕು, ಹೇಗೆ ಬರೆದುದನ್ನು ಹೇಗೆ ಓದಬೇಕು ಎಂದು ಅದರಲ್ಲೇ ಇದೆ.  ******* ಮಾಗ್ಗಾಂಠಿಂ ದಕ್ಷಿಣಕನ್ನಡಾಂತ್ಲಿಂ ಚಿತ್ಪಾವನಂ ಸೋಹೆರೆ ದಾಹೆರೆಂಸಮ ಪತ್ರ ವ್ಯವಹಾರು, ದಿನಚರಿ ಲ್ಯಹವ್ವೆಚಿ, ಲೆಕ್ಖಪತ್ರಂ ಠೆವ್ವೆಚಿಂ, ಹೆಂ ಆವ್ಘಂ ಕಾನ್ನಡ್ಯಾ ಭಾಸ್ಸಾಂತು ಕರೀತ ಆಯ್ಲಿಂಥ್ಸತಿ. ಹೀಂ ಕಾಮ್ಮಂ ಕನ್ನಡ ನಾಹಿಂತೆ ದೇವನಾಗರಿ ಲಿಪಿಂತು ಆಮ್ಚಾ ಭಾಸ್ಸಾ ಕರ್ತಿಂತೆ ಆಮ್ಧಾ ಮಸ್ತ ಜ್ಸುನ್ನೆ ಶಬ್ದ ಅನಿಕ ತೆಂತ್ಸೊ ಉಚ್ಚಾರು ಲಿಖಿತ ರೂಪಾಂತು ಲಭ್ಯ ಹಂತೊ. ಆಮ್ಚ್ಯಾ ಭಾಸ್ಸಾಲಾ ಸ್ವಂತ ಲಿಪಿ ನಾಹಿಂ ಮ್ಹಣಿ ಥೊಡ್ಸೆಂತ್ಸೆ ಮನಾಂತು ಹೀನ ಭಾವನಾ ಥ್ಸೆ. ಪಣ ಹೇಲಾ ಅರ್ಥು ನಾಹಿಂ.  ಸ್ವಂತ ಲಿಪಿ ನತ್ಲೆಲ್ಯೊ ವೆಗ್ಗಳ್ಯೊ ನಾವಾಂಜೀಸ ಭಾಸ್ಸೊ ಮಸ್ತ ಥ್ಸತಿ.  ಇಂಗ್ಲೀಷ ಲ್ಯಹವ್ವೆತ್ಸಂ ರೋಮನ್ ಲಿಪ್ಯಾಂತು, ಹಿಂದಿ ದೇವನಾಗರೀಂತು. ಸ್ವಂತ ಲಿಪಿ ಥ್ಸವೆತ್ಸೆಲಾನಿ ಭಾಸ್ಸಾಚ್ಯಾ  ಸಮೃದ್ಧಿಲಾ ಸಂಬಂಧು ನಾಹಿಂ.   ಕಾಲಾಂತರಾಂತು ಅಪರೂಪಾಲಾ ಕನ್ನಡ ಲಿಪಿಚಿಂ ಚಿತ್ಪಾವನೀ ಪುಸ್ತಕಂ ಆಯ್ಲೀಂ ಥ್ಸತೀರ ತರೀ  ಅಂತರ್ಜಾಲ ಕ್ರಾಂತಿ ಹವ್ನಿ ಸಾಮಾಜಿಕ ಜಾಲತಾಣಂ ಸಾರ್ವತ್ರಿಕ ಜ್ಸಾಲೆ ಉಪ್ರಾಂತ ಮಸ್ತ ಜನಾಂಧಾ  ಚಿತ್ಪಾವನೀಂತು ಲ್ಯಹವ್ವೆಚಿ ಹುಕ್ಕಿ ಆಯ್ಲೆಲಿ.  ಎಷ್ಯಾ...

*ಆಧುನಿಕ ವಿದ್ಯಾಭ್ಯಾಸ ಕೃಷಿ ಬದುಕಿಗೆ ಪೂರಕವಾಗಿದೆಯೇ?*

(ವಾಟ್ಸಾಪ್ ನಿಂದ ಸಂಗ್ರಹಿಸಿದ್ದು)  *ಆಧುನಿಕ ವಿದ್ಯಾಭ್ಯಾಸ ಕೃಷಿ ಬದುಕಿಗೆ ಪೂರಕವಾಗಿದೆಯೇ?* ಸಾಮಾನ್ಯವಾಗಿ ಕೃಷಿಕನಿಗೆ ಬೆಳಗ್ಗಿನ ಹೊತ್ತು ತುರ್ತು ಕೆಲಸಗಳಿರುತ್ತವೆ. ಆ ಕಾರಣದಿಂದ ಪೇಟೆಯ ಕೆಲಸಕ್ಕಾಗಿ ಮನೆ ಬಿಡುವಾಗಲೇ ಗಂಟೆ 10 ಆಗುವುದು ಸಾಮಾನ್ಯ. ಹಾಗಾಗಿ ಪೇಟೆ ಜೀವನದ ಬೆಳಗ್ಗಿನ ಚಟುವಟಿಕೆಯ ಅರಿವು ಹೆಚ್ಚಿನ ಕೃಷಿಕರಿಗೆ ಇರುವುದಿಲ್ಲ.ಕೆಲವು ತಿಂಗಳ ಹಿಂದೆ ಬೆಳಗ್ಗೆ ಎಂಟು ಗಂಟೆಯ ಹೊತ್ತಿಗೆ ಅನಿವಾರ್ಯವಾಗಿ ಒಂದು ವಾರ ಕಾಲ ಪುತ್ತೂರು ಮೂಲಕ ಉಪ್ಪಿನಂಗಡಿಯವರೆಗೆ ಪ್ರಯಾಣಿಸಬೇಕಾಗಿತ್ತು. ದಾರಿ ಉದ್ದಕ್ಕೂ ಶಾಲಾ ಬಸ್ಸುಗಳ ಭರಾಟೆ ಕಂಡು ನನಗೆ ಆಶ್ಚರ್ಯ ಮತ್ತು ಕುತೂಹಲ ಎರಡೂ ಉಂಟಾಯಿತು. ಬಸ್ಸುಗಳ ಮೇಲೆ ಶಾಲೆಯ ಹೆಸರು ಮತ್ತು ಊರು ಇದ್ದ ಕಾರಣ ಯಾವೂರಿನ ಬಸ್ ಎಂದು ಸುಲಭದಲ್ಲಿ ಪತ್ತೆ ಹಚ್ಚುವಂತಾಯಿತು. ಸುಮಾರು 20 ಕಿಲೋ ಮೀಟರ್ ಆಸು ಪಾಸುಗಳಿಂದ ಪುತ್ತೂರು ಬಸ್ಸು ಆ ಊರಿಗೂ ಆ ಊರು ಬಸ್ಸು ಪುತ್ತೂರಿಗೂ ಬರುವುದನ್ನು ಕಂಡು ಆಶ್ಚರ್ಯ ಚಕಿತನಾಗಿದ್ದೆ. ಎಲ್ಲಾ ಶಾಲೆಗಳಲ್ಲಿಯೂ ಒಂದೇ ತರದ ಸರಕಾರಿ ಶಿಕ್ಷಣ ಪದ್ಧತಿಯನ್ನು ಕಲಿಸುವಾಗ, ಅಷ್ಟಷ್ಟು ದೂರದ ಪ್ರಯಾಣವನ್ನು ಮಕ್ಕಳ ಮೇಲೆ ಹೇರುವುದು ಯಾಕಾಗಿ ಎಂದು ನನಗೆ ಈವರೆಗೂ ಗೊತ್ತಾಗಿಲ್ಲ.  ನಾನೆಲ್ಲಿಯೋ ಕೇಳಿದ ಮನೋವೈಜ್ಞಾನಿಕ ವಿಶ್ಲೇಷಣೆಯ ಪ್ರಕಾರ ಮಕ್ಕಳಿಗೆ ಪ್ರಾಪಂಚಿಕ ಅರಿವು ಬರುವುದು 12 ವರ್ಷದ ಪ್ರಾಯದವರೆಗಂತೆ. ಆ ಪ್ರಾಯದಲ್ಲಿ ನೋಡಿ,ಮಾಡಿ, ಕೇಳಿ ಕಲಿತ ವಿದ್ಯೆಗ...

Live Rich and Don't Die Rich

Most of the Indian Senior Citizens die rich but they do not live rich. The younger generation is moving away from Real Estate, whereas the Seniors are still engrossed emotionally in Real Estate. The Seniors have built houses not only for themselves but also for their children, and even for those who have settled abroad or outside their home state. The next generation is least interested in these houses. They have no time to look at these gigantic properties. The next generation is very asset light. One such Senior Citizen died at the age of eighty five. His wife had already passed away a few years ago. One son lives in London and the other one lives in New Zealand. They have the nationality of those countries. Neither was interested in the house their father had built when they were younger. The father had written a Will before his death to divide all the property equally between his two children. The sons did not have the time or the inclination to get the property transferred in thei...

ಸಂಬಂಧಗಳ ಯುಗ

*ಸಂಬಂಧಗಳ ಯುಗ* ಇದು  SSC ವರೆಗೆ ಒಂದೇ ಶಾಲೆಯಲ್ಲಿ ಓದಿದ ಶಾಲೆಯ ನಾಲ್ವರು ಆತ್ಮೀಯ ಸ್ನೇಹಿತರ ಕಥೆ. ಆಗ ನಗರದಲ್ಲಿ ಒಂದೇ ಒಂದು ಐಷಾರಾಮಿ ಹೋಟೆಲ್ ಇತ್ತು. ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ನಂತರ ಆ ಹೋಟೆಲ್‌ಗೆ ಹೋಗಿ ಚಹಾ ಮತ್ತು ತಿಂಡಿ ತಿನ್ನೋಣ ಎಂದು ನಿರ್ಧರಿಸಿದರು. ನಾಲ್ವರಿಂದ ನಲವತ್ತು ರೂಪಾಯಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಅದೊಂದು ಭಾನುವಾರವಾದ್ದರಿಂದ ನಾಲ್ವರೂ ಸೈಕಲ್ ಹತ್ತಿ ಹತ್ತೂವರೆ ಗಂಟೆಗೆ ಹೋಟೆಲ್ ತಲುಪಿದರು. ದಿನೇಶ್, ಸಂತೋಷ್, ಮನೀಶ್, ಮತ್ತು ಪ್ರವೀಣ್ ತಿಂಡಿ ಮತ್ತು ಚಹಾ ಸೇವಿಸುತ್ತಾ ಮಾತನಾಡತೊಡಗಿದರು. ನಾಲ್ವರೂ 40 ವರ್ಷಗಳ ನಂತರ ಅದೇ ಹೋಟೆಲ್‌ನಲ್ಲಿ ಏಪ್ರಿಲ್ 1 ರಂದು ಮತ್ತೆ ಭೇಟಿಯಾಗಲು ಸರ್ವಾನುಮತದಿಂದ ನಿರ್ಧರಿಸಿದರು. "ಅಲ್ಲಿಯವರೆಗೆ ನಾವೆಲ್ಲರೂ ತುಂಬಾ ಶ್ರಮಿಸಬೇಕು, 40 ವರ್ಷಗಳ ನಂತರ ಎಷ್ಟು ಪ್ರಗತಿ ಸಾಧಿಸಲಾಗಿದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿರುತ್ತದೆ" ಎಂದು ಅವರು ಚರ್ಚಿಸಿದರು. ಅಂದು ಕೊನೆಯವನಾಗಿ  ಹೋಟೆಲ್ ತಲುಪುವವನು  ಆ ದಿನದ ಬಿಲ್ ನ್ನು ಪಾವತಿಸಬೇಕು ಎಂದು ನಿರ್ಧರಿಸಿದರು.       ಇವರಿಗೆ ಟೀ, ತಿಂಡಿ ಬಡಿಸಿದ ಮಾಣಿ ಕಾಳು ಇದನ್ನೆಲ್ಲ ಕೇಳುತ್ತಿದ್ದ. ಅಲ್ಲಿಯವರೆಗೆ ಇಲ್ಲೇ ಇದ್ದರೆ ನಿಮ್ಮೆಲ್ಲರಿಗಾಗಿ ನಾನು ಕಾಯುತ್ತಿರುತ್ತೇನೆ ಎಂದರು. ಮುಂದಿನ ಶಿಕ್ಷಣಕ್ಕಾಗಿ ನಾಲ್ವರೂ ಬೇರೆಯಾದರು.     ದಿನೇಶ್ ತನ್ನ ತಂದೆ ಸ್ಥಳಾಂತರಗೊಂಡ ನಂತ...

ಮಾತಿನ ಬೆಲೆ...

ಒಂದು ಕಥೆ..... ಅದು ತುಂಬಾನೇ ಚಳಿಯ ರಾತ್ರಿ, ಕೋಟ್ಯಾಧಿಪತಿಯೊಬ್ಬ ಹೀಗೆ ಹೊರಗಡೆ ಬಂದಿದ್ದ, ಬೀದಿ ಬದಿ ಕುಳಿತಿದ್ದ ಒಬ್ಬ ಮುದುಕುನನ್ನು ಕಂಡು ಮಾತಾಡಿಸಿದ " ನೀನು ಯಾವುದೇ ಬೆಚ್ಚನೆಯ ಹೊದಿಕೆಯಿಲ್ಲದೇ ಕುಳಿತಿರುವೆ ನಿನಗೆ ಚಳಿ ಆಗುತ್ತಿಲ್ಲವೇ ?" ಅ ಮುಪ್ಪು ಮುದುಕ ಉತ್ತರಿಸಿದ " ನನ್ನ ಹತ್ತಿರ ಹೊದಿಕೆಯೇನು ಇಲ್ಲ ಇದನ್ನು ನಾನು ದಿನನಿತ್ಯ ಅನುಭವಿಸುತ್ತೇನೆ, ನನಗೀಗ ಅಭ್ಯಾಸವಾಗಿದೆ. ಕೋಟ್ಯಾಧಿಪತಿ : ಇರು ನಾನು ಈಗಲೇ ಬಂಗಲೆಗೆ ಹೋಗಿ ನಿನಗೊಂದು ಬೆಚ್ಚಗಿರುವ ಉಣ್ಣೆಯ ಶಾಲು ತಂದುಕೊಡುತ್ತೇನೆ.  ಮನೆಗೆ ಹೋದ ಆ ಶ್ರೀಮಂತ ವ್ಯಕ್ತಿ ತನ್ನ ಕೆಲಸ ಕಾರ್ಯಗಳಲ್ಲಿ ಮಘ್ನನಾಗಿ ಆ ಬಡವನನ್ನು ಮರೆತಿದ್ದ. ಬೆಳಗಾಯಿತು... ಆ ಶ್ರೀಮಂತನಿಗೆ ಬಡವನ ನೆನಪಾಯಿತು ತನ್ನ ಕೆಲಸಗಳನ್ನು ಬಿಟ್ಟು ತಕ್ಷಣ ಆ ಬಡವನನ್ನ ಹುಡುಕುತ್ತಾ ಹೊರಟ ಅತೀವ ಚಳಿಯ ಕಾರಣದಿಂದ ಆ ಮುಪ್ಪು ಮುದುಕ ಕುಳಿತ ಜಾಗದಲ್ಲೇ ಮೃತನಾಗಿದ್ದ.  ಆದರೆ ಆ ಬಡವ ತನ್ನ ಕೈಯಲ್ಲಿ ಆತನಿಗಾಗಿ ಒಂದು ಪತ್ರವನ್ನು ಬರೆದಿಟ್ಟಿದ್ದ ಅದರಲ್ಲಿ ಹೀಗೆ ಬರೆದಿದ್ದ... ನನ್ನ ಹತ್ತಿರ ಯಾವುದೇ ಬೆಚ್ಚನೆಯ ಹೊದಿಕೆ ಇಲ್ಲದಿದ್ದಾಗ ಚಳಿಯೊಂದಿಗೆ ಮುಖಾಮುಖಿಯಾಗಿ ಎದುರುಗೊಳ್ಳುವ ಮಾನಸಿಕ ಶಕ್ತಿ ಇತ್ತು, ಅದರೆ ನೀವು ಯವಾಗ ನನಗೆ ಬೆಚ್ಚನೆಯ ಹೊದಿಕೆ ಕೊಟ್ಟು ಸಹಾಯ ಮಾಡುವ ಆಸೆ‌ ಹುಟ್ಟಿಸಿದಿರೋ ಆಗ ನನ್ನ ಮನಸ್ಸು ವಿಚಲಿತವಾಗಿ ಚಳಿಯ ಜೊತೆ ಹೋರಾಡುವ ಮನಃಶಕ್ತಿ ಕಳೆದುಹೋಯಿತು ಹಾಗಾಗಿ ನಾನು ಶವವ...